vishwapriya news
local news
local tulu news
local kannada news
kannada news
tulu news
tununaad news
breaking news
shocking news
udupi breaking news
manglore breaking news
banglore breaking news
latest news
today breaking news
news today
big news
trending news
live news
first news
india news
karnataka news
international news
news first
todays kannada news
todays tulu news
english news
tulu
kannada
telugu
tamil
national news
kgf news
ಮಂಗಳೂರು: ಎಲ್ಪಿಜಿ ಸಿಲಿಂಡರ್ ಸಾಗಿಸುತ್ತಿದ್ದ ಟ್ರಕ್ಗೆ ಬೆಂಕಿ - ಸ್ಥಳೀಯರ ಸಹಕಾರದಿಂದ ತಪ್ಪಿದ ಅನಾಹುತ


Vishwapriya News
ಮಂಗಳೂರು, ಮೇ 13 : ಮಂಗಳೂರಿನಿಂದ ಉಡುಪಿಗೆ ಎಚ್.ಪಿ ಅಡುಗೆ ಅನಿಲದ ಸಿಲಿಂಡರ್ಗಳನ್ನು ಸಾಗಿಸುತ್ತಿದ್ದಂತಹ ಟ್ರಕ್ನಲ್ಲಿ ಏಕಾಏಕಿಯಾಗಿ ಬೆಂಕಿಯು ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಇದು ಆತಂಕವನ್ನು ಮೂಡಿಸಿದೆ.
ಟ್ರಕ್ ಚಾಲಕ ಗುರುವಾರ ರಾತ್ರಿ ಹೆಜಮಾಡಿ ಟೋಲ್ ಪ್ಲಾಜಾ ಬಳಿ ವಾಹನವನ್ನು ನಿಲ್ಲಿಸಿ ಚಹಾ ಕುಡಿಯಲು ಸಮೀಪದ ಸ್ಟಾಲ್ಗೆ ಹೋಗಿದ್ದು, ಈ ವೇಳೆ ಚಾಲಕನ ಸೀಟಿನ ಕೆಳಗೆ ಬೆಂಕಿಯು ಕಾಣಿಸಿಕೊಂಡಿದೆ.
ತಕ್ಷಣ ಸಮೀಪದ ಸಣ್ಣಪುಟ್ಟ ಅಂಗಡಿಗಳ ಎಲ್ಲಾ ಸಿಬ್ಬಂದಿ, ಟೋಲ್ ಪ್ಲಾಜಾ ಸಿಬ್ಬಂದಿ ಮತ್ತು ಸ್ಥಳೀಯರು ಬಕೆಟ್ಗಳಲ್ಲಿ ನೀರು ಸುರಿದು ಬೆಂಕಿಯನ್ನು ನಂದಿಸಿದ್ದಾರೆ.
ಇನ್ನು ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್ ಹಾಗೂ ಸಿಬ್ಬಂದಿ ಕೂಡ ಸ್ಥಳಕ್ಕೆ ಧಾವಿಸಿದ್ದಾರೆ. ಉಡುಪಿಯ ಅಗ್ನಿಶಾಮಕ ದಳದ ತಂಡ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಲಾಯಿತು.
ಎಲೆಕ್ಟ್ರಿಷಿಯನ್ ಗಳನ್ನು ಕರೆಸಿ ತಪಸಣೆ ಮಾಡಿಸಿದಾಗ ವಾಹನದಲ್ಲಿನ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದೆ ಎಂದು ತಿಳಿದು ಬಂದಿದೆ